ಹೆಬ್ಬಾಗಿಲಿಗೆ ಬಂದು ದಾರಿಗಳು ಕಾದಿವೆ
ಯಾರಿದ್ದೀರಿ ಊರೊಳಗೆ?
ಅರಳಿಕಟ್ಟೆಗಳೆಲ್ಲ ಮಾತಿಗಾಗಿ ತವಕಿಸಿವೆ
ಯಾರಿಗಿದೆ ಪುರುಸೊತ್ತು?
ಪಂಜರದ ಗಿಣಿಗಳು ವಟಗುಟ್ಟುತ್ತಲೇ ಇವೆ
ಅರ್ಥ ಬಲ್ಲವರಿದ್ದರೆ ಹೀಗೆ ಬನ್ನಿ
ಧೋ… ಎಂದು ಸುರಿಯುತ್ತಿದ್ದ ಮಳೆ ನಿಂತು
ಎಲ್ಲ ನಿಶ್ಶಬ್ದ. ಕೇಳಿಸುತ್ತಿದೆಯೇ ಹಾಡು?
ನಕ್ಷತ್ರಗಳು ಮಿನುಗುತ್ತ ಆಕಾಶ ಇಳಿದಿದೆ ಭೂಮಿಗೆ
ಚಂದಿರನ ಕೇಳುತ್ತ ನಿದ್ದೆಹೋದ ಮಗು ಮುಗುಳ್ನಗೆ
ಈ ಘಳಿಗೆ ಹೀಗೆ; ಚಾಚಿಕೊಂಡು ಆಚೆಗೆ
ವೆಂಕಟ್ರಮಣ ಗೌಡ